ಭಾನುವಾರ, ಜನವರಿ 29, 2017

Jokes SwalpaNagri

ಸರಾಯಿ V/s ಹಾಲು

ಒಮ್ಮೆ ದೇವರಿಗೆ ಭೂಮಿಗೆ ಬರುವ ಇಚ್ಚೆಯಾಯಿತು. ನಡೆಯುತ್ತ ಬರುವಾಗ ಬಾಯಾರಿಕೆ ಆಯಿತು. ರಸ್ತೆಯ ಬದಿಯಲ್ಲಿ ಒಬ್ಬ ಹಾಲು ಮಾರುವವನ ಭೇಟಿಯಾದಾಗ ಅವನಲ್ಲಿ ಬಾಯಾರಿಕೆ ಹೋಗಲಾಡಿಸುವುದಕ್ಕೋಸ್ಕರ ಹಾಲು ಕೇಳುತ್ತಾರೆ. ಆತ " ಹಾಲು ಪುಕ್ಕಟೆಯಾಗಿ ಸಿಗುವುದಿಲ್ಲ" ಎಂದು ನಿರಾಕರಿಸಿ ಬಿಟ್ಟ.

ದೇವರು ನಿರಾಶೆಯಿಂದ ಮುಂದೆ ನಡೆಯ ತೊಡಗಿದರು....

ದಾರಿಯಲ್ಲಿ ಮದುವೆಯ ಮೆರವಣಿಗೆಯೊಂದು ಸಾಗುತ್ತಿತ್ತು ಮತ್ತು ಮೆರವಣಿಗೆಯಲ್ಲಿ ಪಾಲ್ಗೊಂಡ ಜನರಿಗೆ ಸರಾಯಿ ನೀಡಲಾಗುತ್ತಿತ್ತು.

ದೇವರು ಒಬ್ಬಾತನಲ್ಲಿ ತೃಷೆ ನಿವಾರಿಸಲೋಸುಗ ಸರಾಯಿ ಕೇಳಿದಾಗ  ಆತ " ನಿಮಗೆಷ್ಟು ಬೇಕೋ ಅಷ್ಟು ಕುಡಿಯಿರಿ.... ನೃತ್ಯ ಮಾಡಿ..... ಆನಂದ ಪಡೆಯಿರಿ" ಅಂದ.

ದೇವರು ಅವನ ಈ ಮಾತಿನಿಂದ  ಪ್ರಸನ್ನರಾಗಿ ಸರಾಯಿ ಮಾರುವವರಿಗೆ ವರದಾನ ಮತ್ತು ಹಾಲು ಮಾರುವವನೀಗೆ ಶಾಪ ಕೊಟ್ಟು ಬಿಟ್ರು.

ಹಾಲಿನವನಿಗೆ ಕೊಟ್ಟ ಶಾಪ:  " ನಿನ್ನ ಅಂಗಡಿಗೆ ಯಾರೂ ಬಾರದೆ ನೀನು‌ ಬೆಳಿಗ್ಗೆ ಎದ್ದು ಮನೆ ಮನೆಗೆ ಹೋಗಿ‌ ಹಾಲು ಮಾರಾಟ ಮಾಡಬೇಕು".

ಸರಾಯಿಯವನಿಗೆ ಕೊಟ್ಟ ವರದಾನ
"  ನೀನೆಂದೂ ಸರಾಯಿ ಮನೆ ಮನೆಗೆ ಮಾರಾಟ ಮಾಡದೆ ಜನರು ನಿನ್ನನ್ನು ಹುಡುಕಿಕೊಂಡು ಬರಬೇಕು" ಅಂತ ಹೇಳಿ ದೇವರು ಮಾಯವಾಗಿಬಿಟ್ಟರು.

ಆ ವರದಾನ ಇಂದಿಗೂ  ಚಾಲ್ತಿಯಲ್ಲುದೆ.

ಇದೇ ಕಾರಣಕ್ಕೆ ಸ್ವಾಮಿ... ಜನ ಮಲ್ಯಾರನ್ನು‌ ಹುಡುಕುತ್ತಿದ್ದಾರೆ....😂😂

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ